ಇವಳು ನನ್ನವ್ವ

ಇವಳು ನನ್ನವ್ವ
ತಂಪಿಗಾಗಿ ಕಾದವಳು
ಹನಿ ಬೀಳದೆ ಒಡಲೆಲ್ಲ
ಬಿರುಕು ಬಿರುಕು
ಬರಗಾಲ ಒಳಗೂ ಹೊರಗು
ಒಲೆಯ ಒಳಗಿನ
ಬಿಸಿ ಕಾವು,
ಕಾವಿನಲಿ ಬೆಂದ
ಅವ್ವ ಹನಿಗಾಗಿ
ಮೊಗವೆತ್ತಿ ನಡುನೆತ್ತಿಯ
ಮೇಲಿನ ಕಪ್ಪು ಮೋಡಕ್ಕಾಗಿ
ಕಾಯುತ್ತಲೇ ಇರುವಳು
ಬೆಳ್ಳ ಬೆಳ್ಳನೆ
ಬಂಜೆ ಮೋಡ
ಬಸಿರಾಗಿ ಕಪ್ಪಾಗಿ
ನೀರ ಹನಿಸುವಾಗ
ಕಾಲಬುಡ ತಂಪೇರಿ
ಹಸಿರು ಅರಳುವ ಹೊತ್ತು
ನನ್ನವ್ವನಿಗಲ್ಲ ಮಳೆಯ ತಂಪು
ಇಷ್ಟಾದರೂ ಕೆರಳಲು
ಒಡಲ ಕಂಪಿಸಿ
ಬಿರಿಯಲರಿಯಳು
ನೂರು ತುತ್ತು ತಿನಿಸಿ
ಹಸಿವ ಮರೆಸ ಬಯಸಿ
ಕಾಯುತ್ತಲೇ ಇರುವಳು
ಎಲ್ಲೊ ಬಿದ್ದ ಮಳೆಯ
ಸದ್ದಿಗೆ ಪುಳಕಗೊಳ್ಳುವ ಅವ್ವ
ನೋವನ್ನೆಲ್ಲ ಹೆಪ್ಪು
ಹಾಕಿ, ಬೆಣ್ಣೆ ಕಡೆವಳು
ಬೆಣ್ಣೆ ತಿನಿಸಿ ನೋವ
ಮರೆವಳು

ಹರಕು ಮುರುಕು
ಮನೆಯ ಗೋಡೆಗೆಲ್ಲ
ಮಣ್ಣ ಮೆತ್ತಿ ಸುಣ್ಣ
ಬಳಿವಳು, ಸುಣ್ಣ
ಮೆದ್ದ ಗೋಡೆಯೆಲ್ಲ
ಅವ್ವನ ಮನಸ್ಸಿನಂತೆ
ಬೆಳ್ಳ ಬೆಳ್ಳಗೆ ಈಗ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತಿಬಿಂಬ
Next post ಕಿಟಕಿ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys